ವೇಶ್ಯೆಯರ ಸಹವಾಸಕ್ಕಾಗಿ ಕಳ್ಳತನ ಮಾಡಿದ ವ್ಯಕ್ತಿಯ ಬಂಧನ! | ಜನತಾ ನ್ಯೂಸ್
ಬೆಂಗಳೂರು : 70 ವರ್ಷದ ವೃದ್ಧನನ್ನು ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಗಳೂರು ಮೂಲದ ರಮೇಶ್ ಅಲಿಯಾಸ್ ತಾತ (70) ಬಂಧಿತ ಆರೋಪಿಯಾಗಿದ್ದು, ಈತನಿಂದ 8 ಲಕ್ಷ ರೂ. ಮೌಲ್ಯದ 162 ಗ್ರಾಂ ಚಿನ್ನಾಭರಣ, ಐದು ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ
ರಮೇಶ್ ಎರಡು ಮದುವೆಯಾಗಿದ್ದು ಮೂವರು ಮಕ್ಕಳಿದ್ದಾರೆ. ಆದರೆ, ಅದು ಸಾಲದೆಂಬಂತೆ ಮೂರನೇ ಮದುವೆಗೂ ಪ್ರಯತ್ನಿಸಿದ್ದನಂತೆ. ಇದಕ್ಕೆ ಮನೆಯವರು ಒಪ್ಪದಿದ್ದಾಗ, ಮನೆಯಲ್ಲಿದ್ದ ಹಣ, ಚಿನ್ನಾಭರಣವನ್ನು ಕದ್ದು ತನಗೆ ಸುಖ ನೀಡುವ ಮಹಿಳೆಯ ಮೈಮೇಲೆ ಹಾಕಿ ತನ್ನ ಚಟ ತೀರಿಸಿಕೊಳ್ಳುತ್ತಿದ್ದ. ದುಶ್ಚಟಗಳಿಗೆ ಮನೆಯವರು ಈತನನ್ನು ಹೊರ ಹಾಕಿದ್ದರು.
ಹೀಗೆ ಹೊರಹೋದವನು ತಮಿಳುನಾಡು ಸೇರಿ ಕಳ್ಳತನ ಮಾಡಿ ವೇಶ್ಯೆಯರ ಸಹವಾಸ ಮಾಡುತ್ತಿದ್ದ. ತಮಿಳುನಾಡಿನಲ್ಲಿ ಏಳು ಪ್ರಕರಣಗಳಲ್ಲಿ ಜೈಲು ವಾಸ ಅನುಭವಿಸಿದ್ದಾನೆ.
ಅಲ್ಲಿಂದ ಬಿಡುಗಡೆಯಾದ ಬಳಿಕ ಬೆಂಗಳೂರಿಗೆ ಬಂದು ತನ್ನ ಹಳೆ ಚಾಳಿ ಮುಂದುವರಿಸಿದ್ದ. ಎರಡು ವರ್ಷಗಳ ಹಿಂದೆ ನಗರಕ್ಕೆ ಬಂದ ಈತ ಮನೆಗಳ್ಳತನ ಮಾಡಿ ಶೋಕಿ ಮಾಡುತ್ತಿದ್ದ.
ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಬಿಟಿಎಂ 1ನೇ ಹಂತದ ನಿಮ್ಹಾನ್ಸ್ ಲೇಔಟ್ನ ಮನೆಯೊಂದರ ಬೀಗ ಮುರಿದು ಚಿನ್ನಾಭರಣ, ನಗದು ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಮಾಲೀಕರು ಎಸ್.ಜಿ. ಪಾಳ್ಯ ಠಾಣೆಗೆ ದೂರು ನೀಡಿದ್ದರು.
ಸಿಸಿ ಟಿವಿ ದೃಶ್ಯಾವಳಿಗಳ ಮೇಲೆ ಈಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.